Friday, 18 July 2014


 RAJAKUMARA NAGARA BGVS 1st CONVENTION

ENVIRONMENT WORKSHOP FOR SYUDENTS-1

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ  ಹವಾಮಾನ ಬದಲಾವಣೆ  ಹಾಗೂ ಪರಿಸರ ಅಧ್ಯಯನ ಶಿಬಿರ
 inaguration

ನಾಗರೀಕತೆ ಹಾಗೂ ಐಶಾರಾಮಿ ಜೀವನದ ಸಲುವಾಗಿ ಮನುಷ್ಯ ಸಾವಿರಾರು ಮರಗಳನ್ನ, ಪ್ರಾಣಿ-ಪಕ್ಷಿಗಳನ್ನ ವಿನಾಶಕ್ಕೆ ದೂಡಿದ್ದಾನೆ ಮತ್ತು ಅಮೃತಶಿಲೆ ಹಾಗೂ ಲೋಹಗಳ ಹುಡುಕಾಟದಲ್ಲಿ ಭೂಗರ್ಭವನ್ನು ಲೂಟಿ ಮಾಡುತ್ತಿದ್ದಾನೆ. ಇದೆಲ್ಲ ತಪ್ಪಬೇಕಾದರೆ ಪ್ರಾನ್ಸ್‌ನ ತತ್ವಜ್ಞಾನಿ, ಶಿಕ್ಷಣತಜ್ಞ ರೂಸೋ ಹೇಳಿದಂತೆ ಮನುಷ್ಯ ಮತ್ತೆ ಅನಾಗರಿಕನಾಗಬೇಕು ಅಷ್ಟೆ ಎಂದು ಹಾಸನ ಆಕಾಶವಾಣಿಯ ಪ್ರಸಾರ ನಿರ್ವಹಕರಾದ ಸುಜಾತ ಎಫ್ ತಲ್ವಾರ್ ಹೇಳಿದರು. ಅವರು ಇತ್ತೀಚೆಗೆ ಬೆಂಗಳೂರಿನ ಸಿ.ಪಿ.ಆರ್ ಪರಿಸರ ಶಿಕ್ಷಣ ಕೇಂದ್ರವು ಹಾಸನ ತಾಲೋಕು ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಭಾಗಿತ್ವದಲ್ಲಿ ಪರಿಸರ ಕಾಳಜಿ ಉಳ್ಳ ಪ್ರೌಢಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ತಾಲೋಕಿನ ಯುವಜನರಿಗಾಗಿ ಹವಾಮಾನ ಬದಲಾವಣೆ ಮತ್ತು ಪರಿಸರ ಅಧ್ಯಯನ ಕುರಿತು ನಡೆಸಿದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಿಗೆ ಸಣ್ಣ ಕಥೆಗಳ ಮೂಲಕ ಪರಿಸರ ಎಂದರೇನು? ಹಾಗೂ ಪರಿಸರವನ್ನು ಮನುಷ್ಯ ಹೇಗೆ ವಿನಾಶದ ಕಡೆಗೆ ಕೊಂಡೋಗಿದ್ದಾನೆ ಎಂಬುದನ್ನು ಕಥೆಗಳ ಮೂಲಕ ತಿಳಿಸುತ್ತಾ ಇಂದಿನ ಮಕ್ಕಳು ಪರಿಸರ ಕುರಿತ ಆಳ ಅಧಯಯನದಲ್ಲಿ ತೊಡಗಿಕೊಂಡಾಗ ಮುಂದಿನ ದಿನದಲ್ಲಿ ಪರಿಸರ ಪ್ರೇಮಿ ಅಭಿವೃದ್ಧಿ ಕಡೆ ಗಮನ ಹರಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಸೈಕಲ್ ಬಳಕೆಯನ್ನು ಹೆಚ್ಚಿಸಲು ಬಿ.ಜಿ.ವಿ.ಎಸ್ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜಿ.ವಿ.ಎಸ್‌ನ ತಾಲೂಕು ಅಧ್ಯಕ್ಷರಾದ ಮಮತ ಶಿವು ವಹಿಸಿ ಮಾತನಾಡಿ ಪರಿಸರ ಸಂರಕ್ಷಣ ಎನ್ನುವುದು ಈಗ ಶೈಕ್ಷಣಿಕ, ಸಾಮಾಜಿಕ ಹಾಗೂ ಅಂತರ ರಾಷ್ಟ್ರೀಯ ರಾಜಕೀಯ ಸಮಸ್ಯೆಯಾಗಿ ಪರಿವರ್ತನೆಯಾಗಿದೆ ಹಾಗಾಗಿ ಶಾಲಾ ಈಕೋಕ್ಲಬ್ಬುಗಳ ಮೂಲಕ ಮಕ್ಕಳಲ್ಲಿ ಪರಿಸರದ ವಸ್ತು ಸ್ಥಿತಿ ಕುರಿತು ಅರ್ಥೈಸುವ ಚಟುವಟಿಕೆ ನಡೆಸುವ ಅಗತ್ಯ ಇದ್ದು ಅದನ್ನು ಬಿಜಿವಿಎಸ್ ದೇಶಾದ್ಯಾಮತ ನಡೆಸುತ್ತಿದೆ ಎಂದರು. ಕಾರ್ಯಕ್ರಮದ ಸಂಚಾಲಕರಾದ ಕವಿತ.ಕೆ.ವಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಬಿ.ಜಿ.ವಿ.ಎಸ್ ನ ಧ್ಯೇಯ ಹಾಗೂ ಚಟುವಟಿಕೆಗಳನ್ನು ತಿಳಿಸುವ ಜೊತೆಗೆ  ಪರಿಸರ ಅಧ್ಯಯನದ ಹಂತಗಳು, ಗುರಿ ಮತ್ತು ಉದ್ದೇಶಗಳನ್ನು ತಿಳಿಸಿದರು. ಬಿ.ಜಿ.ವಿ.ಎಸ್‌ನ ತಾಲೂಕು ಖಜಾಂಚಿ ಶ್ರೀಮತಿ ರೇಖ ನಿರೂಪಿಸಿ ಸ್ವಾಗತಿಸಿದರು. ಬಿ.ಜಿ.ವಿ.ಎಸ್‌ನ ತಾಲೂಕು ಕಾರ್ಯದರ್ಶಿ ಜಯಪ್ರಕಾಶ್ ವಂದಿಸಿದರು.
 

activities

ಇಡೀ ದಿನ ಹಾಸನದ ಜವೇನ ಹಳ್ಳಿ ಮಠ ಹಾಗೂ ಎಸ್.ಜಿ.ಆರ್ ಶಾಲಾ ಆವರಣ ಹೊಸಲೈನ್ ರಸ್ತೆ, ಉತ್ತರ ಬಡಾವಣೆಯಲ್ಲಿ ಪರಿಸರ, ಪರಿಸರ ವ್ಯವಸ್ಥೆ, ಜೀವ ವೈವಿಧ್ಯ, ಹವಾಮಾನ ಬದಲಾವಣೆ, ಶಕ್ತಿ ನಿರ್ವಹಣೆ, ಇಕೋ ಕ್ಲಬ್ ಚಟುವಟಿಕೆ ವಿಷಯಗಳನ್ನು ಪಿಪಿಟಿ, ಆಟ-ಹಾಡು ಹಾಗೂ ಸಂಶೋಧನಾ ಚಟುವಟಿಕೆಗಳ ರೂಪದಲ್ಲಿ ತರಬೇತಿ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಪಿ.ಆರ್ ಪರಿಸರ ಕೇಂದ್ರ  ಬೆಂಗಳೂರಿನಿಂದ ಆಗಮಿಸಿದ್ದ ರವಿಶಂಕರ್ ಪರಿಸರ, ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯ ಮಾಹಿತಿಯನ್ನು ಮತ್ತು ಸಮೀಕ್ಷೆಯನ್ನು ಚಟುವಟಿಕೆ ಹಾಗೂ ಪಿಪಿಟಿಯ ಮೂಲಕ ತಿಳಿಸುತ್ತಾ ನಮ್ಮ ಮನೆ ಹಾಗು ಶಾಲಾ ಸುತ್ತ ಮುತ್ತ ಇರುವ ಪರಿಸರ ವ್ಯವಸ್ಥೆಯನ್ನು ಅಧ್ಯಯನ ಮಾಡುವ ವಿಧಾನ ತಿಳಿಸಿ ಬೀದಿ ಹಾಗೂ ಶಾಲೆಗಳಲ್ಲಿ ಪರಿಸರ ಕೂಟ ರಚಿಸಲು ಕರೆ ನೀಡಿದರು.
 ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೆ. ಎಸ್ ರವಿಕುಮಾರ್ ಹವಾಮಾನ ವೈಪರಿತ್ಯ (ಗ್ಲೋಬಲ್ ವಾರ್ಮಿಂಗ್) ಬಗ್ಗಿನ ಮಾಹಿತಿಯನ್ನು ಪಿಪಿಟಿಯ ಮೂಲಕ ವಿವರಿಸಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಹವಾಮಾನ ವೈಪರೀತ್ಯದಿಮದ ಹಾಸನ ಜಿಲ್ಲೆಯ ಜನತೆ, ಕೃಷಿ ಹಾಗೂ ಕುಡಿವ ನೀರಿನ ಪರಿಣಾಮದ ಕುರಿತು ಸಮೀಕ್ಷೆ ನಡೆಸಲು ತಿಳಿಸಿದರು.
ಮಲೆನಾಡು ಜನಪರ ಹೋರಾಟ ಸಮಿತಿಯ ಕಿಶೋರ್ ಕುಮಾರ್ ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಪರಿಸರ ಚಳುವಳಿಗಳ ಪರಿಚಯ ಮಾಡಿ ಕೊಟ್ಟರು.

Friday, 11 July 2014

    ಇತಿಹಾಸದಲ್ಲಿ ವಿಜ್ಞಾನ

ಅಹಮದ್ ಹಗರೆ
ಕಾರ್ಯದರ್ಶಿ- ಬಿಜಿವಿಎಸ್-ಹಾಸನ

ವಿಜ್ಞಾನ ಮತ್ತು ತತ್ವಜ್ಞಾನದ ನಡುವೆ ನಿರಂತರವಾಗಿ ನಡೆದು ಬಂದಿರುವ ಚರ್ಚೆ "ಜೀವ ಮತ್ತು ಅದರ ಅಸ್ತಿತ್ವದ" ಕುರಿತು ಈ ಸಂಘರ್ಷದಲ್ಲಿ ಜಗತ್ತಿನ ಚಿಂತಕ ವರ್ಗ ೨ ಪಾಲು ಭಗಂತ ವ್ಯವಸ್ತಿತವಾಗಿ ಜಗತ್ತು ಮತ್ತು ಜೀವವನ್ನು ಸೃಷ್ಠಿಮಾಡಿದ್ದಾನೆ ಎಂದು ವಾದಿಸುವ ವರ್ಗ ಚೈತನ್ಯವಾದಿಗಳು ಅಥವ ಭಾವವಾದಿಗಳು ಪ್ರಾಚೀನ ಗ್ರೀಕಿನಲ್ಲಿ ವೈಟಲಿಸ್ಟ್ ಎನ್ನುತ್ತಿದ್ದರು ಭಾರತದ ನ್ಯಾಯದರ್ಶನ ಈ ವಾದದ ಮುಂಚೂಣಿಯಲ್ಲಿದ್ದ ದರ್ಶನಶಾಸ್ತ್ರ ಹಾಗೇಯೇ ಭೌತಶಕ್ತಿಗಳಿಂದ ತಾನಾಗೆ ವಿಶ್ವ ಮತ್ತು ಜೀವ ವಿಕಾಸವಾಗಿದೆ ಎಂದು ಪ್ರತಿಪಾದಿಸುವ ವರ್ಗ ಇವರಿಗೆ ಯಾಂತ್ರಿಕವಾದಿಗಳು ಅಥವ ಭೌತವಾದಿಗಳು ಪ್ರಾಚೀನ ಗ್ರೀಕಿನಲಿ ಮೆಕ್ಯಾನಿಸ್ಟ್ ಎನ್ನುತ್ತಿದ್ದರು ಭಾರತದಲ್ಲಿ ಸಾಂಖ್ಯ ಈ ವಾದದಲ್ಲಿದ್ದ ದರ್ಶನ. ಈ ಎರಡೂ ವಾದಗಳ ನಡುವೆ ನಿರಂತರವಾಗಿ ನಡೆಯುತ್ತಾ ಬಂದ ಸಂಘರ್ಷ ಸತ್ಯದ ಹುಡುಕಾಟದಲ್ಲಿ ವಿಜ್ಞಾನಕ್ಕೆ ಜನ್ಮ ನೀಡಿತು. [ಭಾವವಾದಕ್ಕೆ ಧರ್ಮಮಂದಿರಗಳು, ರಾಜರು, ಪಾಳೇಗಾರರು ಬೆಂಬಲ ನೀಡಿದರೆ ಭೌತವಾದಕ್ಕೆ ವಿಜ್ಞಾನ ಆಸರೆಯಾಗಿ ನಿಂತಿತು] ವಿಜ್ಞಾನದ ವಿಕಾಸ ಹಾಗೂ ಬೆಳವಣಿಗೆಯನ್ನು ಮಾನವ ಸಮಾಜ ಬೆಳೆದು ಬಂದ ನಾಲ್ಕು ಪ್ರಮುಖ ಸ್ಥರಗಳ ಬೆಳವಣಿಗೆಯ ಜೊತೆ ನೋಡಬೇಕು.
೧.    ೧.    ಇತಿಹಾಸ ಪೂರ್ವದಲ್ಲಿ ವಿಜ್ಞಾನ
೨.    ಗುಲಾಮಿ ವ್ಯವಸ್ಥೆಯಲ್ಲಿ ವಿಜ್ಞಾನ
೩.    ಊಳಿಗಮಾನ ವ್ಯವಸ್ಥೆಯಲ್ಲಿ ವಿಜ್ಞಾನ
೪.    ಬಂಡವಾಳಶಾಹಿ ವ್ಯವಸ್ಥೆಯಲ್ಲಿ ವಿಜ್ಞಾನ

    ೧.    ಇತಿಹಾಸ ಪೂರ್ವದಲ್ಲಿ ವಿಜ್ಞಾನ

    ಮಾನವನ ವಿಕಾಸ, ನಾಗರೀಕತೆ ಬೆಳೆಯಲಾರಂ,  ಚಕ್ರ, ಬೆಂಕಿ, ಮನೆ, ಸನ್ನೆ ವಿಕಾಸದ ಜೊತೆಯಲ್ಲೇ ಬೆಳವಣಿಗೆ.
    ನದಿ, ಆಕಾಶ, ಕಾಡ್ಗಿಚ್ಚು, ಪ್ರವಾಹ ವಿಜ್ಞಾನದ ಸತ್ಯ ತಿಳಿಯಲು ಮಾನವನಿಗೆ ಅನಿವಾರ್ಯತೆ ಸೃಷ್ಠಿ

೨.    ಗುಲಾಮಿ ವ್ಯವಸ್ಥೆಯಲ್ಲಿ ವಿಜ್ಞಾನ(ಬಾಲ ವಿಜ್ಞಾನದ ಕಾಲ ಘಟ್ಟ)

    ಕ್ರಿಸ್ತ ಪೂರ್ವದಿಂದ ಕ್ರಿಸ್ತ ಶಕದ ಕಾಲಘಟ್ಟ :- ಗ್ರೀಕಿನಲ್ಲಿ ವಿಜ್ಞಾನದ ಉಗi ಮತ್ತು ವೈಭವ
    ಖಗೋಳ, ಗಣಿತ ಹಾಗೂ ವೈದ್ಯಕೀಯ ಶಾಸ್ತ್ರದ ಬಾಲ್ಯಾವಸ್ಥೆ
    ಕ್ರಿ.ಪೂ.೧೫೦೦ವರ್ಷಗಳ ಹಿಂದೆ ಕಣಾದ ವೈಶೇಷಿಕದರ್ಶನ(ಪರಮಾಣುವಾದ ಮಂಡನೆ, ಚರಕ ವೈದ್ಯಕೀಯ ಸಂಹಿತೆ
    ಥೇಲಿಸ್ ಮತ್ತು ಪೈಥಾಗೊರಸ್ ಪ್ರಕೃತಿ ವಿಜ್ಞಾನದ ಆದ್ಯ ಪ್ರವರ್ತಕರು
    ಅಲೆಗ್ಸಾಂಡ್ರಿಯ ವಿಜ್ಞಾನ ಅಧ್ಯಯನದ ಕೇಂದ್ರ ಸ್ಥಾನ ಆಗಿದ್ದಾಗ ವಿಶ್ವದ ರಚನೆ ಕುರಿತು ತೀವ್ರ ಚರ್ಚೆ ಧರ್ಮಗುರುಗಳ ಜೊತೆ ಪ್ರಕೃತಿ ವಿಜ್ಞಾನಿಗಳ ಸಂಘರ್ಷ
    ಕ್ರಿ.ಪೂ. ೬೨೪-೫೪೬: ಥೇಲ್ಸ್ : ಪ್ರಕೃತಿಯಲ್ಲಿ ಗೋಚರಿಸುವ ಎಲ್ಲ ವಸ್ತುಗಳೂ ಭೌತಿಕ ಮೂಲ
    ಕ್ರಿ.ಪೂ. ೬೧೦-೫೪೬: ಅನಾಕ್ಸಿಮೇಂಡರ್: ವಸ್ತು ಗುಣ ಹಾಗೂ ಅನಂತತೆಯನ್ನು ಮೀರಿದ ಜಲಮೂಲವಾಗಿದೆ
    ಕ್ರಿ.ಪೂ. ೫೮೫-೫೨೮: ಅನಾಕ್ಸಿಮೇನಸ್ : ವಸ್ತು ವಾಯು ಮೂಲ, ಕ್ರಿ.ಪೂ. ೫೩೫-೪೭೫ ಹೆರಾಕ್ಲಟಿಸ್ : ಅಗ್ನಿ ಮೂಲ
    ಕ್ರಿ,ಪೂ. ೪೯೦-೪೩೦: ಎಂಪಿಡೂಕಸ್ & ಕ್ರಿ.ಪೂ.೩೮೪-೩೨೨: ಅರಿಸ್ಟಾಟಲ್ ವಸ್ತು ೪ ಮೂಲಭೂತ ಅಂಶಗಳು ಈಥರ್ (ಆಕಾಶ ದ್ರವ್ಯ] ಎಂಬ ವಸ್ತವಿನೊಂದಿಗೆ ಸಂಬಂದಿಸಿದೆ
    ಕ್ರಿ.ಪೂ. ೪೭೦-೩೮೦ : ಡಿಮಾಕೃಟೀಸ್  ನಿರೂಪಿಸುವ ತತ್ವ ನಿರೂಪಣೆ : ಭೌತದ್ರವ್ಯಗಳಿಂದ ಜಗತ್ತಿನ ನಿರ್ಮಾಣ
೧.    ಪ್ರಜ್ಞೆಯಿಂದ ಸ್ವತಂತ್ರ ಅಸ್ತಿತ್ವ
೨.    ಇಂದ್ರಿಯಗಳ ಮೂಲಕ ಸಂವೇದನೆಗಳಿಗೆ ಮೂಲವಾಗಿರುತ್ತದೆ
೩.    ಸಂವೇದನೆ ಮತ್ತು ಭಾವನೆ ಭೌತವಸ್ತುವಿನ ಪಡಿಯಚ್ಚು
೪.    ಶಾರೀರಿಕ ಗುಣಧರ್ಮ ಹೊಂದಿರುತ್ತದೆ (ಎಲ್ಲ ವಸ್ತುಗಳ ರಚನೆಗೆ ಭೌತ ವಸ್ತುವೇ ಮೂಲ)
೫.    ಸ್ಥಾಯಿ, ಸ್ಥಿರವಾದುದು (ಅಣುಗಳು ಎಂದಿನಂತೆಯೇ ಇರುವುವು)
    ಅನಾಕ್ಸಗೊರಸ್: ಗ್ರಹಣ, ಉಲ್ಕಾಪಾತ, ಅರಿಸ್ಟಾಕ್ಸ್ ಗ್ರಹಣಗಳಿಗೆ ಕಾರನ ಮತ್ತು ಸೂರ್ಯಕೇಂದ್ರ ಸಿದ್ದಾಂತ ಪ್ರತಿಪಾದನೆ ಮಾಡಿದ ಇದಕ್ಕಾಗಿ ಇಬ್ಬರೂ ಗಡಿಪಾರಿನ ಶಿಕ್ಷೆಗೆ ಒಳಪಡಬೇಕಾಯಿತು
    ಯೂಕ್ಲಿಡ್, ಹಿಪಾರ್ಕಸ್, ಆರ್ಕಿಮಿಡಿಸ್ ಇವರುಗಳು ಆಕಾಲದ ಅಗತ್ಯಕ್ಕೆ ಅನುಗುಣವಾಗಿ ಯಂತ್ರಶಾಸ್ತ್ರ, ಗಣಿತಶಾಸ್ತ್ರ ಮತ್ತು ಖಗೋಳಶಾಸ್ತ್ರ ಬೆಳವಣಿಗೆ

    ಭಾರತದಲ್ಲಿ

೧.    ಆರ್ಯಭಟನಿಗಿಂತ ೭ಶತಮಾನ ಮುಂಚೆ ಅರಿಸ್ಠಾರ್ಕಸ್ ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ ಎಮದು ಪ್ರತಿಪಾದಿಸಿದ ಆದರೆ ಆತನಿಗೆ ಆರ್ಯಭಟನಿಗಿದ್ದಷ್ಟು ಶಾಸ್ತ್ರೀಯ ಖಚಿತತೆ ಇರಲಿಲ್ಲ ಮತ್ತು ಲೆಕ್ಕಾಚಾರ ಕರಾರುವಾಕ್ಕಾಗಿರಲಿಲ್ಲ. : ಕುತೂಹಲ ಎಂದರೆ ಅವರವರ ದೇಶದಲ್ಲಿ ಈ ಇಬ್ಬರ ಪ್ರತಿಪಾದನೆ ಕೂಡಲೇ ಒಪ್ಪಿಗೆ ಸಿಗಲಿಲ್ಲ.
೨.    ಹರಪ್ಪ ಮತ್ತು ಮೆಹಂಜೋದಾರೋ ಭಾರತದ ಅತಿ ಪ್ರಾಚೀನ ನಾಗರೀಕತೆ ಸುಮಾರು ಕ್ರಿ.ಪೂ ೧೦ಸಾವಿರ ವರ್ಷಗಳಿಂದ ಕ್ರಿಪೂ.೩೦೦೦ ವರ್ಷಗಳವರಗೆ ಬಾಳಿದ ಅತ್ಯಂತ ಪುರಾತನ ಹಾಗೂ ವಿಶ್ವದ ಎಲ್ಲಾ ನಾಗರೀಕತೆಗಳಿಗಿಂತ ನೈಸರ್ಗಿಕ ಹಾಗೂ ತಾಂತ್ರಿಕ ನಿಪುಣತೆಯನ್ನು ಸಾಧಿಸಿದ್ದ ನಾಗರೀಕತೆ ಆಗಲೇ ನೌಕಾಯಾನ, ಕೃಷಿ, ನಗರೀಕರಣ, ಅಚ್ಚುಕಟ್ಟು, ಖಗೋಳದಲ್ಲಿ ನಿಪುಣತೆ ಹಾಗೂ ಸೌರಮಾನ ಪಂಚಾಂಗ ಕಂಡು ಹಿಡಿದಿದ್ದರು. ಜಗತ್ತಿನಲ್ಲಿ ಮೊದಲಹಂತದ ಸುವ್ಯವಸ್ಥಿತ ನಗರೀಕರಣ ಸುಟ್ಟ ಇಟ್ಟಿಗೆಗಳ ಮಹಡೀ ಮನೆ ಈ ಮಾದರಿ ನಗರೀಕರಣ ಪುನಃ ಮೌರ್ಯರಕಾಲದವರೆಗೆ ಮತ್ತು ರೋಂ ಸಾಮ್ರಾಜ್ಯ ಬರುವವರೆಗೆ ಅಂದರೆ ಸುಮಾರು ೧೫೦೦ ವರ್ಷಗಳ ಕಾಲ ಕಾಯಬೇಕು. (ಸಿಂಧೂ ನಗರದ ಕೊಳ್ಳದಲ್ಲಿ ಬಂಡೆಗಳು ವಿರಳ ಹಾಗೂ ಬೃಹತ್ ಪ್ರವಾಹಗಳಿಂದ ಮನೆ ಸಂರಕ್ಷಣೆಗೆ ಇವುಗಳ ಅನಿವಾರ್ಯತೆ ಇತ್ತು. ಆದರೆ ಪ್ರಾಕೃತಿಕ ವಿಜ್ಞಾನ ಮತ್ತು ವೈದ್ಯಶಾಸ್ತ್ರ ಒಂದು ಜ್ಞಾನವಾಗಿ ಬೆಳೆದಿರಲಿಲ್ಲ.)
೩.    ಆರ್ಯರ ಆಗಮನ ಹರಪ್ಪ ಸಂಸ್ಕೃತಿ ನಾಶ ಮೂಢನಂಬಿಕೆ, ಕಂದಾಚಾರ, ಚಾಂದ್ರಮಾನ ಪಂಚಾಂಗ, ಖಗೋಳದಮೇಲೆ ಅಲಕ್ಷ್ಯ ಹರಪ್ಪರ ಖಗೋಳ ಬಳಸಿ ಜ್ಯೋತಿಷ್ಯಮಾಡಿಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನ ಅವನತಿ ಕಂಡಿತು.
೪.    ಉಪನಿಷತ್ ಕಾಲದಲ್ಲಿ ಉದ್ದಾಲಕ ಆರುಣಿ ಅಂದರೆ ಥೇಲಿಸನಿಗಿಂತ ೧೦೦೦ವರ್ಷ ಮುಂಚೆಯೇ ಪರಮಾಣುವಾದವನ್ನು ಪ್ರಾಯೋಗಿಕವಾಗಿ ವಿವರಿಸಿ ತೋರಿಸಿದ ಕಣಾದ ಮತ್ತು ಥೇಲಿಸ್ ಬರೇ ತರ್ಕದಿಂದ ಪ್ರತಿಪಾದಿಸಿದ್ದರು. ಗಾರ್ಡನ್ ಚೈಲ್ಡ್ ಉದ್ದಾಲಕ ಆರುಣಿ ಜಗತ್ತಿನ ಮೊದಲ ಪ್ರಾಕೃತಿಕ ವಿಜ್ಞಾನಿ ಎಂದು ಪ್ರತಿಪಾದನೆ
೫.    ಕಬ್ಬಿಣದ ಆವಿಷ್ಕಾರ ಕೃಷಿ ತಂತ್ರಜ್ಞಾದ ಬಲವೃದ್ಧಿ, ಗಣತಂತ್ರ ನಾಶ ಬೃಹತ್ ಜನಪದಗಳು ತಲೆ ಎತ್ತಲಾರಂಭ ಗುಲಾಮಿ ವ್ಯವಸ್ಥೆ ಊಳಿಗಮಾನ್ಯ ವ್ಯವಸ್ಥೆಯಾಗಿ ಬದಲಾಗಲಾರಂಬಿಸಿದಾಗ ಹೊಸ ಹೊಸ ಧರ್ಮಗಳು ವಿಜ್ಞಾನವನ್ನು ಮೂಲೆಗೆ ತಳ್ಳಲಾರಂಬಿಸಿತು.

೩.    ಊಳಿಗಮಾನ ವ್ಯವಸ್ಥೆಯಲ್ಲಿ ವಿಜ್ಞಾನ(ಶೂನ್ಯ ಕಾಲ ಅಥವ ಅಂಧಕಾರದ ಕಾಲ)

    ಕ್ರಿ.ಶ ೩ ಶತಮಾನ - ಕ್ರಿ.ಶ.೧೧ನೇ ಶತಮಾನ- ರಸಾಯನ ಶಾಸ್ತ್ರ

    ವಿಶ್ವದಾದ್ಯಂತ ಬೆಳವಣಿಗೆ ಸ್ಥಗಿತ ಈ ಕಾಲಘಟ್ಟವನ್ನ ಅಂಧಕಾರದ ಯುಗ ಎಂದು ವಿಜ್ಞಾನಿಗಳು ಮಾತ್ರವಲ್ಲ ಇತಿಹಾಸಕಾರರು ಮತ್ತು ದಾಶ್ನಿಕರೂ ಸಹ ಕರೆದರು.
    ಜಗತ್ತಿನಾದ್ಯಂತ ಪಾಳೇಗಾರಿ ರಾಜವಂಶ ಗಣತಂತ್ರವ್ಯವಸ್ಥೆಯನ್ನು ನಾಶಮಾಡಿ ಬೆಳೆಯುವಾಗ ಜನ ಹಾಗೂ ಸಮಾಜವನ್ನು ವರ್ಗಾಧಾರಿತವಾಗಿ ಒಡೆಯಲು ಮಾಟ, ಮಂತ್ರ, ದೇವರು, ಮೂಢನಂಬಿಕೆ, ಮೂರ್ತಿಪೂಜೆ, ಜೋತಿಷ್ಯ, ಪುನರ್ಜನ್ಮಗಳಿಗೆ ಜನ್ಮ ನೀಡಿ ದೇವನಿಯಾಮಕ ಎಂದು ಆಳತೊಡಗಲು ಪ್ರಾರಂಬಿಸದಾಗ ಬರೀ ಸಂಘರ್ಷ, ಯುದ್ಧ, ಲಾಲಸೆಗಳಿಂದ ಅರಾಜಕ ವ್ಯವಸ್ಥೆ ನಿರ್ಮಾಣ ಆಯಿತು.
    ಭಾರತದಲ್ಲಿ ಗಣ ಸಂಸ್ಕೃತಿಯ ನಾಶ ಮೌರ್ಯ ಸಾಮ್ರಾಜ್ಯದ ಉಚ್ರಾಯಕ್ಕೆ ನಾಂದಿ ಹಾಡಿತು, ಗುಪ್ತ್ರರ ಕಾಲಘಟ್ಟದಲ್ಲಿ ಕರ್ಮಸಿದ್ಧಾಂತ ಭಾರತದ ವೈಭವೋಪೇತ ಗಣಿತ, ಖಗೋಳ, ತರ್ಕ, ತಂತ್ರಜ್ಞಾನವನ್ನು ನಾಶಗೊಳಿಸಿ ಅಂಧಕಾರದಲ್ಲಿ ಬೀಳಿಸಿತು.
    ಆದರೂ ಈ ಕಾಲಘಟ್ಟದಲ್ಲಿ ರಾಜರ ಚಿನ್ನ ಹಾಗೂ ಬಣ್ನದ ಮೋಹ ರಸಾಯನಶಾಸ್ತ್ರದ ಉದ್ಭವಕ್ಕೆ ನಾಂದಿ ಹಾಡಿತು. ಬಹಳ ಮುಖ್ಯವಾಗಿ ಲಿಪಿ ವಿಜ್ಞಾನ ಹಾಗೂ ಸಾಹಿತ್ಯ ಬೆಳೆದು ಬಂತು.

    ಕ್ರಿ.ಶ.೧೧ - ಕ್ರಿ.ಶ.೧೫ ರಿನೆಸಾನ್ಸ್ - ಖಭೌತ ವಿಜ್ಞಾನದ ವಿಕಾಸ

    ರೋಮನ್ ಕ್ಯಾಥೋಲಿಕ್ ಚರ್ಚು ಜಮೀನ್ದಾರಿ ಪದ್ಧತಿಗೆ ಆಧಾರ ಸ್ಥಂಬ ಹಾಗೂ ಧರ್ಮಗುರು, ರಾಜ ಹಾಗೂ ಭಾರೀ ಭೂಮಾಲೀಕರ ನಡುವಣ ಶೀತಲ ಸಮಾರಾರಂಭ
    ವಿಜ್ಞಾನದ ಜಿಗಿತ ಇಲ್ಲಿಂದ ಆರಂಭ ಕೋಪರ್ನಿಕಸ್ ಪುನಃ ಅರಿಸ್ಟಾರ್ಕಸ್‌ನ ಸಿಧ್ಧಾಂತಕ್ಕೆ ಮರುಜನ್ಮ
    ಮೈಕೆಲ ಆಂಜೆಲೋ, ಡವಿಂಚಿ ಕಲೆಯಮೂಲಕ ಧರ್ಮ ತಿರಸ್ಕಾರ
    ಹೊಸ ಹೊಸ ಪಟ್ಟಣ ಕಂಡುಕೊಳ್ಳಲು ಹೊಸ ವಿಜ್ಞಾನದ ಉಗಮ.
    ಭಾರತದಲ್ಲಿ ಭಗವದ್ಘೀತೆ ಮತ್ತು ಕರ್ಮಸಿದ್ಧಾಂತ ರಾಜರ ಸಂವಿಧಾನವಾಗಿತ್ತು ವಿಜ್ಞಾನಿಗಳಾಗಬೇಕಾಗಿದ್ದವರು ಜೋತಿಷಿಗಳು, ಮಾಟಗಾರರು ಆಗಿದ್ದರು, ಸಾಹಿತ್ಯ ಸಂಪೂರ್ಣ ರಾಜಾಶ್ರಯದ ಪಾದತಳದಲ್ಲಿ ಶರಣಾಗಿತ್ತು. ಆದರೆ ೧೧ನೇ ಶತಮಾನದಲ್ಲಿ ಜೇಡರ ದಾಸೀಮಯ್ಯ ಜವಳಿ ತಂತ್ರಜ್ಞಾನದ ಬೆಳವಣಿಗೆಗೆ ಈ ಗುಲಾಮಗಿರಿ ವಿರುದ್ಧ ಶರಣ ಚಳುವಳಿಗೆ ಮುನ್ನುಡಿ ಬರೆದ ನಂತರ ಬಸವಣ್ಣ ಸ್ವಲ್ಪಕಾಲ ಎಬ್ಬಿಸಿದ ಚಳುವಳಿ ಅದು ಧಾರ್ಮಿಕ ಮತ್ತು ಸಾಮಾಜಿಕ ನೆಲೆಗಟ್ಟಿನಲ್ಲಿ ಬಿಟ್ಟರೆ ವಿಜ್ಞಾನದ ಚಿಗುರೂ ಕೂಡ ಏಳಲಿಲ್ಲ.

    ಕ್ರಿ.ಶ.೧೫ ಶತಮಾನ - ಕ್ರಿ.ಶ.೧೮ ಶತಮಾನ - ಭೌತಶಾಸ್ತ್ರದ ಉಚ್ರಾಯ ಕಾಲಘಟ್ಟ

    ಜಮೀನ್ದಾರಿ ಪದ್ಧತಿಯನ್ನು ತುಳಿದು ಬಂಡವಾಳ ವ್ಯವಸ್ಥೆಯ ಉಗಮ ಅದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಅನಿವಾರ್ಯ ಮತ್ತು ಅಗತ್ಯವಾಗಿತ್ತು.
    ವಿಜ್ಞಾನದ ಬುದ್ಧಿ ನಿಷ್ಠ ಮತ್ತು ಚರ್ಚಿನ ಶೃದ್ಧಾ ನಿಷ್ಠ ತತ್ವದ ಸಂಘರ್ಷ ಬುಗಿಲು ಈ ಸಂಘರ್ಷದಲ್ಲಿ ವಿಜ್ಞಾನ ಬಹುಮುಖಿಯಾಗಿ ಬೆಳೆಯಿತು
    ಪ್ರಾಚೀನ ಗ್ರೀಕಿನ ಪರಮಾಣುವಾದಕ್ಕೆ ಪುನರುಜ್ಜೀವನ ಯೂರೋಪಿನ ಹೊಸ ಪೀಳಿಗೆ ಆಕರ್ಷಣೆ ಮತ್ತು ಹುರುಪು ಹಾಗಾಗಿ
೧.    ಮೊದಲ ಹಂತದಲ್ಲಿ ಕೋಪರ್ನಿಕಸನ ಸೂರ್ಯ ಕೇಂದ್ರ ಸಿದ್ದಾಂತ ಖಗೋಳಶಾಸ್ತ್ರವನ್ನು ಉತ್ತುಂಗಕ್ಕೆ ಕೊಂಡೊಯ್ಯಿತು ಮತಧರ್ಮದ ನಂಬಿಕೆ ವಿರುದ್ಧ ಗದಾಪ್ರಹಾರ ಬ್ರೂನೋ, ಬೋಡ್, ಟೈಕೊಬ್ರಾಹೆ, ಗೆಲಿಲಿಯೋ, ಕೆಪ್ಲರ್ ಪ್ರವಾಹದ ವಿರುದ್ಧ ಈಜಿ ಭೌತಶಾಸ್ತ್ರದ ಬೆಳವಣಿಗೆಗೆ ಅಡಿಪಾಯ ಹಾಕಿದರು
೨.    ಎರಡನೇ ಹಂತದಲ್ಲಿ ಮೈಕಲ್ ಆಂಜಲೋ, ಡವಿಂಚಿ ಕಲಾಮಾಧ್ಯಮದ ಮೂಲಹ ವಿಜ್ಞಾನ ಪ್ರಸಾರಕ್ಕೆ ಕಾರಣರಾದರು
೩.    ಮೂರನೇ ಹಂತದಲ್ಲಿ ಫ್ರಾನ್ಸಿಸ್ ಬೇಕನ್೧೬೦೫(ಇಂಗ್ಲೇಂಡ್), ಡೆಕಾರ್ತೆ(ಫ್ರಾನ್ಸ್) ವಿಜ್ಞಾನವನ್ನು ಒಂದು ತತ್ವಜ್ಞಾನವನ್ನಾಗಿ ರೂಪಿಸದರು ಇದು ರಾಜಕೀಯ ಬದಲಾವಣೆಗೆ ಹಾಗೂ ವಿಜ್ಞಾನಿಗಳಿಗೆ ಸಾಮಜಿಕ ಚಿಂತನೆ ಬೆಳೆಸುವಲ್ಲಿ ಕಾರಣವಾಯಿತು.
೪.    ನ್ಯೂಟನ್, ಫ್ಯಾರಡೆ, ಕಣಗಳ(ಕ್ವಾಂಟಮ್) ಸ್ವರೂಪ ಮತ್ತದರ ಅಸ್ತಿತ್ವ ಹಾಗೂ ಶಕ್ತಿಯ ರಹಸ್ಯ ಬಿಡಿಸಿ ಭೌತಶಾಸ್ತ್ರದ ಉಚ್ರಾಯ ಸ್ಥಿತಿಗೆ ಕಾರಣರಾದರು ಆ ಮೂಲಕ ವಿಜ್ಞಾನ ಒಂದು ತಂತ್ರಜ್ಞಾನವಾಗಿ ಬೆಳೆಯಲು ವೇದಿಕೆ ಒದಗಿಸಿತು


೪.    ಬಂಡವಾಳಶಾಹಿ ವ್ಯವಸ್ಥೆಯಲ್ಲಿ ವಿಜ್ಞಾನ (ಆಧುನಿಕ ವಿಜ್ಞಾನದ ಕಾಲ)

  ಕ್ರಿ.ಶ.೧೯ ಶತಮಾನ - ಕ್ರಿ.ಶ ೨೦ನೇ ಶತಮಾನ - ತಂತ್ರಜ್ಞಾನದ ಯುಗ

    ಆಧುನಿಕ ವಿಜ್ಞಾನ ಮತ್ತು ಆಧುನಿಕ ಸಮಾಜ ಪರಸ್ಪರ ಹೊಂದಿಕೊಂಡಿದೆ. ಆದರೆ ಮೊದಲು ಬೆಳೆದದ್ದು ಆಧುನಿಕ ವಿಜ್ಞಾನ ಈ ವಿಜ್ಞಾನ ಮಾನವ ಸಮಾಜವನ್ನು ಮೇಲ್ಸ್ಥರಕ್ಕೆ ಏರಿಸಿದೆ.
    ಆಧುನಿಕ ವಿಜ್ಞಾನದ ಬೆಳವಣಿಗೆಗೆ ಪ್ರಮುಖ ಕಾರಣ "ಸಮುದ್ರಯಾನ" ಈ ಯಾನದ ಅನಿವಾರ್ಯತೆ ಉತ್ಪತ್ತಿ ಹೆಚ್ಚಿಸುವುದು ಮತ್ತು ಅದರ ವಿಲೆವಾರಿಗೆ ಮಾರುಕಟ್ಟೆ ಹುಡುಕುವುದು ಅದಕ್ಕಾಗಿ ಪ್ರಕೃತಿ ಶಕ್ತಿಯ ಅಧ್ಯಯನ ಮತ್ತು ಬಳಕೆಯ ಹಿನ್ನಲೆಯಲ್ಲಿ ಸಮುದ್ರಯಾನ ಆರಂಭವಾಯಿತು ಮತ್ತು ಅನಿವಾರ್ಯವೂ ಆಗಿತ್ತು.
    ಸಮುದ್ರಯಾನಕ್ಕೆ ಮಾರುತಗಳ ವೇಗ, ಶಕ್ತಿ ಮತ್ತು ದಿಕ್ಕು ತಿಳಿಯುವುದು ಅವಶ್ಯವಾಗಿತ್ತು ಏಕೆಂದರೆ ಸಮುದ್ರಯಾನಕ್ಕೆ ಹಡಗು ಬಹಳ ಮುಖ್ಯ ಹಡಗಿನ ತಯಾರಿಕೆಯ ತಂತ್ರಜ್ಞಾನ ಹಾಗೂ ನಿಸರ್ಗದೊಂದಿಗೆ ಹೊಂದಾಣಿಕೆಗಾಗಿ ಸಂಶೋಧನೆ ಚುರುಕುಗೊಂಡಿತು. (ಸಾವಿರಾರು ಯಾತ್ರಿಕರು ಸಾಗರಯಾನದಲ್ಲಿ ದಿಕ್ಕು ತಪ್ಪಿ ಅಸ್ತವ್ಯಸ್ತತೆ, ಸಾವು-ನೋವು, ಹಿಂತಿರುಗಿ ಬರಲಾರದಂತಹ ವ್ಯವಸ್ಥೆಗೆ ತಲುಪಿದರು ಈ ಹಿನ್ನಲೆಯಲ್ಲಿ ಯೂರೋಪಿನಲ್ಲಿ ಬಂಡಲುಗಟ್ಟಲೆ ಸಾಹಸಯಾನದ ಸಾಹಿತ್ಯಗಳು ಬೀದಿ ಬೀದಿಯಲ್ಲಿ ಚೆಲ್ಲಾಡಿದವು [ರಾಬಿನ್ಸನ್‌ನ ಟ್ರೆಷರ್ ಐಲ್ಯಾಂಡ್, ಲಿಲಿಪುಟ್ & ದ ಗಲಿವರ್, ಕೋರಲ್ ಐಲ್ಯಾಂಡ್]
    ಹಾಗಾಗಿ ಸಮುದ್ರಯಾನಕ್ಕೆ ಆಕಾಶದ ಅನಿವಾರ್ಯತೆ ಬಂದದ್ದರಿಂದ ಖಗೋಳವನ್ನು ಬೆಳೆಸಿತು. ಕೋಪರ್ನಿಕಸ್, ಗೆಲಿಲಿಯೋ ಕೆಪ್ಲರನ ಸಂಶೋಧನೆಗಳು ಈ ಹಿನ್ನಲೆಯಲ್ಲಿ ವಿಕಾಸಗೊಂಡವು.
    ಮಾನವ ಸಮಾಜದ ಅಂದಿನ ಸವಾಲು ಶುದ್ಧ ವಿಜ್ಞಾನ ತಿಳಿಯಲು ಹೊರಟಿರಲಿಲ್ಲ ಪ್ರಪಂಚದ ರಚನೆ ಅರ್ಥೈಸಿಕೊಳ್ಳಲು ಹೊರಟಾಗ ಸ್ಥಾಪಿತ ವರ್ಗದ ಜ್ಞಾನ ಸಿದ್ಧಾಂಥ ತಡೆಯೊಡ್ಡಿದಾಗ ಅದನ್ನು ಒಡೆದು ಆಧುನಿಕ ವಿಜ್ಞಾನ ಬೆಳೆದು ಬಂತು
    ಒಂದು ಕಡೆ ಟೆಲೆಸ್ಕೋಪು ದೂರ ದೂರದ ವಸ್ತುಗಳ ಪರಿಚಯಿಸುತ್ತಾ ಹೋದಹಾಗೆ ಮೈಕ್ರೋಸ್ಕೋಪು(ಲಿವನ್ ಹಾಬ್ಸ್) ಅತಿ ಸೂಕ್ಷ್ಮ ವಸ್ತುಗಳನ್ನು ಕತ್ತಲ ಲೋಕದಿಂದ ಬೆಳಕಿನ ಲೋಕಕ್ಕೆ ಎಳೆತಂದವು.
    ಹಿಂದೆ ಜಡವಸ್ತುಗಳಿಮದ ಜೀವೋತ್ಪತ್ತಿ ಆಗುತ್ತದೆ ಎಂದು ತಿಳುವಳಿಕೆ ಇತ್ತು ಲೂಯಿಪಾಶ್ಚರ್ ಜೀವೋತ್ಪತ್ತಿ ನಿರ್ಜೀವದಿಂದಲ್ಲ ಜೀವದಿಂದಲೇ ಉಗಮ ಎಂದು ಪ್ರತಿಪಾದಿಸಿದ ಹೀಗಾಗಿ ಸೂಕ್ಷ್ಮ ಜೀವಿಶಾಸ್ತ್ರ ಜನ್ಮ ತಾಳಿತು ಈ ಸಂಶೋಧನೆ ದ್ರಾಕ್ಷಾರಸ ಹಾಳಾಗುವುದನ್ನು ತಪ್ಪಿಸಲು ಯೋಚಿಸುವಾಗ ಹುಟ್ಟಿಕೊಂಡಿತು ನಂತರದಲ್ಲಿ ಲಿವನ್ ಹಾಬ್ಸ್ ಸೂಕ್ಷ್ಮದರ್ಶಕ ಕಂಡುಹಿಡಿದ ಮೇಲೆ ಸೂಕ್ಷ್ಮ ಜೀವಿಯನ್ನು ಭೇದಿಸಿ ಅದರ ಜೀವಕೋಶದೊಳಗೂ ನುಗ್ಗಿತು. ಅದು ಎಲ್ಲಾ ಜೀವಿಗಳ ಜೀವಕೋಶ ಒಂದೇ ಎಂದು ಕ್ರಾಂತಿಕಾರಕ ಮಾಹಿತಿ ಒದಗಿಸಿತು.
    ಜೀವಕೋಶ ಜೀವಶಾಸ್ತ್ರದ ಉಗಮಕ್ಕೆ ನಾಂದಿ ಹಾಡಿತು ಡಾರ್ವಿನ್ನನ ಸಂಶೋಧನೆಗೂ ಸ್ಪೂರ್ತಿ ನೀಡಿತು ಕಾರ್ಲಸ್ ಲಿನಿಯಸ್, ಲಮಾರ್ಕ್, ವ್ಯಾಲೆಸ್ ಎಲ್ಲರ ಶ್ರಮ ಹಾಗು ಎಲ್ಲ ಪ್ರಕಾರದ ವಿಜ್ಞಾನ ಮತ್ತು ವಿಜ್ಞಾನಿಗಳ (ಖಭೌತ, ಭೂಗೋಳ ಹಾಗೂ ಜೀವವಿಜ್ಞಾನ) ಶ್ರಮದಿಂದ ಜೀವವಿಕಾಸ ಹೊಸಯುಗದ ಕ್ರಾಂತಿಗೆ ನಾಂದಿ ಹಾಡಿತು.
    ಎಡ್ವರ್ಡ್ ಜೆನ್ನರ್ ಆ ಕಾಲದ ಯೂರೋಪ್ ಭಿಕರವಾಗಿ ಅನುಭವಿಸುತ್ತಿದ್ದ ಸಿಡುಬು ರೋಗಕ್ಕೆ ಧಾರ್ಮಿಕ ಕಾರಣ, ಕರ್ಮಸಿದ್ಧಾಂತವನ್ನು ಭೇದಿಸಿ ಕಾರಣ ಕಂಡು ಹಿಡಿದು ಸರಳ ಔಷದ ಕಂಡು ಹಿಡಿದಾಗ ಜನ ಚರ್ಚಿಗೆ ಸವಾಲು ಹಾಕಿ ವಿಜ್ಞಾನ ಒಪ್ಪಿಕೊಳ್ಲಲು ಆರಂಭ, ಒಂದೊಂದಾಗಿ ವಿಜ್ಞಾನದ ಸ್ಪೋಟ ಹಳೆಯ ಜ್ಞಾನವನ್ನು ಚಿಂದಿ ಚಿಮದಿ ಮಾಡಿ ಹೊಸ ಅರಿವಿನ ಸ್ಪೋಟಕ್ಕೆ ಕಾರಣವಾಯಿತು.
    ವಿಜ್ಞಾನದ ಸ್ಪೋಟ ಧರ್ಮಾಧಾರಿತ ತತ್ವಶಾಸ್ತ್ರ ಮತ್ತು ವಿಜ್ಞಾನಾಧಾರಿತ ತತ್ವಶಾಸ್ತ್ರದ ನಡುವೆ ಸಂಘರ್ಷ ಸೃಷ್ಠಿಸಿ
೧.    ಅರಿವಿನ ಸ್ಪೋಟ ಸಮಾಜ ಹೇರಿದ ಮಿತಿಯನ್ನು ಮೀರಿ ಅದರ ಕುಬ್ಜತೆ ಒಡೆದು ಹಾಕಿ ಮಾನವನ ಹುಟ್ಟು ಮತ್ತು ರಚನೆ ಒಂದೇ ಎಂದು ಸಾಧಿಸಿತು.( ಫ್ರಾನಸಿಸ್ ಬೇಕನ್: ಮಾನವನ ತಿಳುವಳಿಕೆ ಪಂಚೇಂದ್ರಿಯ ಜನ್ಯ ಇದು ಹಾಬ್ಸ್, ರೂಸೋ, ವಾಲ್ಟೇರ್ ಚಿಂತನೆ ಫ್ರಾನ್ಸ್ ಕ್ರಾಂತಿಗೆ ನಾಂದಿ-೧೭೮೦ ಅದಕ್ಕೂ ಮೊದಲು ಅಮೇರಿಕದ ಕ್ರಾಂತಿ-೧೭೬೫)
೨.    ಮಾನವನ ಎಲ್ಲ ಜ್ಞಾನಕ್ಕೂ ಪಂಚೇಂದ್ರಿಯಗಳೆ ಕಾರಣ [ಶಂಕರಾಚಾರ್ಯ: ಜಗನ್ಮಿತ್ಯ ಬ್ರಹ್ಮ ಸತ್ಯ, ಆತ್ಮ ಪರಮಾತ್ಮ, ಮೇಲ್ವರ್ಗದವರದು ನೀಲಿ ರಕ್ತ, ಜೀತಗಾರರದು-ಕೆಂಪು ರಕ್ತ, ರಾಜ ಪ್ರತ್ಯಕ್ಷ ದೇವತ, ಆಡಂ-ಈವ್ ಎಲ್ಲ ಬೊಗಳೆ]
೩.    ನಿರಂಕುಶ ಪ್ರಭುತ್ವವನ್ನು ನಾಶ ಮಾಡಿ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿತು ಮಾತ್ರವಲ್ಲ ಜಗತ್ತಿನಲ್ಲಿ ಕಾರ್ಮಿಕ ವರ್ಗ ಎಂಬ ಹೊಸ ಸಮುದಾಯವನ್ನೇ ಸೃಷ್ಟಿಸಿತು

೫.    ಇಂದಿನ(೨೧ನೇ ಶತಮಾನದ) ಸಮಕಾಲೀನ ವಿಜ್ಞಾನದ ಬೆಳವಣಿಗೆ

    ಗೆಲಿಲಿಯೋ, ಕೆಪ್ಲರ್, ನ್ಯೂಟನ್............. ಏಕವ್ಯಕ್ತಿ ಸಂಶೋಧನೆ, ಈಗ ಸಾಮೂಹಿಕ ಸಂಶೋಧನೆಯ ಕಾಲ ಸಂಶೋಧನೆಯಲ್ಲಿ ಕೋಟ್ಯಾಂತರ ವುಕ್ತಿಗಳು ಭಾಗಿ ಹೀಗಾಗಿ ದಿನಂಪ್ರತಿಸಂಶೋಧನೆಗಳಾಗುತ್ತಿವೆ. ಅದರ ವೇಗವೂ ಕೂಡ ಸಹಸ್ರಪಟ್ಟು ಹೆಚ್ಚು.
    ಕ್ವಾಂಟಮ್ ಭೌತಶಾಸ್ತ್ರ, ಸಾಪೇಕ್ಷತಾ ಸಿದ್ದಾಂತ ವಸ್ತವುವಿನ ಮೂಲರಚನೆಯ ಗರ್ಭವನ್ನು ಸೀಳಿ ದೈವ ಸಿದ್ಧಾಂತವನ್ನು ಒಡೆದು ಹಾಕಿದೆ ಹಾಗಾಗಿ ಹಿಗ್ಸ್ ಬೋಸಾನ್, ಲಾರ್ಜಹೆಡ್ರಾನ್ ಕೊಲೈಡರ್ ಪ್ರಯೋಗ ವಿಶ್ವ ಸೃಷ್ಠಿಗೆ ಜಗನ್ನಾಟಕ ಸೂತ್ರದಾರಿ ಅಲ್ಲವೇ ಅಲ್ಲ ಎಂಬುದನ್ನು ಸಾಧಿಸಿದೆ. ಐನಸ್ಟೀನ್,ಮ್ಯಾಕ್ಸ್ ಫ್ಲಾಂಕ್, ನೀಲ್ಸ್ಬೋರ್, ಸ್ಟೀಫನ್ ಹಾಕಿಂಗ್ ವಿಜ್ಞಾನವನ್ನು ನೆಲಮಟ್ಟಕ್ಕೆ ಇಳಿದರು.
    ಜೀನೋಮ್ ತಂತ್ರಜ್ಞಾನ ಮಾನವ ಹಾಗೂ ಎಲ್ಲಾ ಜೀವಿಗಳ ಹುಟ್ಟಿನ ಮೂಲ ಎಂದ ಜೀವಶಾಸ್ತ್ರದ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿ ಜೀವ ತಂತ್ರಜ್ಞಾನವಾಗಿ(ಬಯೋ ಟೆಕ್ನಾಲಜಿ) ರೂಪಿಸಿದೆ ಇದು ೨೧ನೇ ಶತಮಾನದ ಸರ್ವಶ್ರೇಷ್ಠ ಸಂಶೋಧನೆ ಎಂದು ಪ್ರಸಿದ್ಧಿಗಳಿಸಿದೆ ಹಾಗಾಗಿ ಕ್ಲೋನಿಂಗ್, ಸರೋಗೇಟ್ ತಾಯ್ತನ... ಮಾಡಲುಸಹಾಯಕವಾಗಿ ಬಂಜೆತನ ದೂರ ಮಾಡಲು ಸಾಧ್ಯವಾಗಿದೆ.
    ಕಂಪ್ಯೂಟರ್- ಸೂಪರ್ ಕಂಪ್ಯೂಟರ್-ಅಂತರಜಾಲ ತಂತ್ರಜ್ಞಾನ ನಭೋಮಂಡಲದ ಸಿದ್ದಾಂತದ ಮೂಲಕ ಧರೆಯಾವರಿಸಿದೆ.
    ತಾಯಿಯ ಜೀವಾಂಕುರದ ಮೈಟೋಕಾಂಡ್ರಿಯಾದಲ್ಲಿರುವ ಶಕ್ತಿಕಣಗಳನ್ನು ಸಮಗ್ರವಾಗಿ ಅಧ್ಯಯನಮಾಡಿ ಮಾನವನ ಹುಟ್ಟಿನ ಮೂಲ ಆಫ್ರಿಕ ಎಂದು ಸಾಧಿಸಿದೆ ಡಾರ್ವಿನ್ ವಿಕಾಸವಾದ ಸತ್ಯ ಎಂದು ತೋರಿಸಿದೆ. ಪಂಪನ ಮಾನವ ಕುಲ ತನೊಂದೇ ವಲಂ ಸಾರ್ಥಕ್ಯ ಪಡೆದಿದೆ.
    ಮಾನವನ ಕೃಷಿ ಚಟುವಟಿಕೆಗೆ ಅರಬ್ಬಿ ಸಮುದ್ರ ಇಲ್ಲವೇ ಬಂಗಾಳಕೊಲ್ಲಿ ಕಾರಣ ಎಂ ತಿಳುವಳಿಕೆ ದೂರವಾಗಿ ಇಡಿ ವಿಶ್ವದ ಮಾರುತಗಳ ಚಲನೆ ಜಲಗೋಳದಲ್ಲಾಗುವ ಬದಲಾವಣೆಗೆ ಕಾರಣ, ಸಾಗರದ ಅಬ್ಬರದ ನಡುವೆ ಏಳುವ ಪ್ರವಾಹ, ಚಂಡಮಾರುತಗಳಿಗೆ ಎಲ್ನಿನೋ ಮತ್ತು ಲಾನಿನ ಉಷ್ಣೂದಕ ಪ್ರವಾಹ ಕಾರಣ ಎನ್ನುವ ಸತ್ಯವನ್ನು ಇಂದಿ ಹವಾಮಾನ ವಿಜ್ಞಾನ ತೆರೆದು ತೋರಿಸಿದೆ.
    ಇಂಜಿನೀಯರಿಂಗ್, ವೈದ್ಯಕೀಯ ವಿಜ್ಞಾನ ಎಂತಹ ವಿಷಮ ಪರಿಸ್ಥಿಯಲ್ಲೂ ಸಮಾಜದ ಆಸರೆಯಾಗಿ ನಿಂತಿವೆ.
    ಇವೆಲ್ಲದರ ಫಲವಾಗಿ ವಿಜ್ಞಾನ ವೇಗವಾಗಿ ಮತ್ತು ವಿಸ್ತಾರವಾಗಿ ಬೆಳೆಯುತ್ತಿದೆ ಆದರೆ ವಿಜ್ಞಾನದ ಸಂಶೋಧನೆ ಮತ್ತು ವಿಸ್ತಾರ ನಮ್ಮ ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತಿದೆ? ಮತ್ತು ಬೀರಬೇಕು?
ವಿಜ್ಞಾನ ಸಾರ್ವಕಾಲಿಕ ಸತ್ಯ ಹಾಗೂ ಮನುಕುಲ ರಕ್ಷಕ